ಕಸ ವಿಲೇವಾರಿಗೆ ತಡೆ ವಿಚಾರ: ತುಷಾರ್ ಗಿರಿನಾಥ್ ಹೇಳಿದ್ದಿಷ್ಟು

ಮಿಟ್ಟಗಾನಹಳ್ಳಿ ಬಳಿ ಕಸ ವಿಲೇವಾರಿಗೆ ತಾತ್ಕಾಲಿಕ ತಡೆ ಉಂಟಾಗಿತ್ತು. ಬಿಬಿಎಂಪಿ ಆಯುಕ್ತರು ಈ ಸಮಸ್ಯೆಗೆ ಪ್ರತಿಕ್ರಿಯಿಸಿದ್ದು, ಕಸ ವಿಲೇವಾರಿಯನ್ನು ಪುನರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, 3 ಕೋಟಿ ಲೀಟರ್‌ಗೂ ಅಧಿಕ ಲೀಚೇಟ್ ಸೋರಿಕೆಯಿಂದ ಪರಿಸರ ಮಾಲಿನ್ಯ ಉಂಟಾಗಿದೆ ಲೀಚೇಟ್ ತೆರವುಗೊಳಿಸಲು ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.