ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರವೊಂದು ರಚನಾತ್ಮಕವಾಗಿ ಕೆಲಸ ಮಾಡಬೇಕಾದರೆ, ಸರ್ಕಾರದ ತಪ್ಪು ಒಪ್ಪುಗಳನ್ನು ಟೀಕಿಸಲು, ತಿದ್ದಲು ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕ ಇರಲೇಬೇಕು. ರಾಜ್ಯದ ಸ್ಥಿತಿ ಚೆನ್ನಾಗಿಲ್ಲ, ಭೀಕರ ಬರಗಾಲ ಎದುರಾಗಿದೆ, ಕಾವೇರಿಯಲ್ಲಿ ನೀರಿಲ್ಲ ಮತ್ತು ಇನ್ನೂ ಹಲವಾರು ಸಮಸ್ಯೆಗಳಿವೆ, ಹಾಗಾಗಿ ಸರ್ಕಾರದ ಜೊತೆ ಫೈಟ್ ಮಾಡಲು ಒಬ್ಬ ವಿರೋಧ ಪಕ್ಷದ ನಾಯಕ ಇಲ್ಲವೆಂದ್ರೆ ಹೇಗೆ ಅಂತ ಚಲುವರಾಯಸ್ವಾಮಿ ಪ್ರಶ್ನಿಸಿದರು.