ಶಿವಾನಂದ ಸರ್ಕಲ್ ಸುತ್ತಮುತ್ತ ಕಳೆದ ರಾತ್ರಿ ವಾಹನ ಸಂಚಾರ ಸ್ತಬ್ಧ

ದಿನದ ಕೆಲಸ ಮುಗಿಸಿಕೊಂಡು ಮನೆಗಳ ಕಡೆ ಹೊರಟ ಜನರ ವಾಹನಗಳು ಜಾಮ್ ನಲ್ಲಿ ಸಿಲುಕಿ ಪರದಾಡುವ ಸ್ಥಿತಿ. ಅಲ್ಲೇ ಸುಗಮ ಖಾಸಗಿ ಸಂಸ್ಥೆಗೆ ಸೇರಿದ ಬಸ್ಸೊಂದು ಅಂಡರ್ ಪಾಸ್ ಬಳಿ ಕೆಟ್ಟು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿದೆ. ಕೇವಲ ಶಿವಾನಂದ ಸರ್ಕಲ್ ಮಾತ್ರ ಅಲ್ಲ, ನಗರದ ಹಲವಾರು ರಸ್ತೆಗಳು ಜಲಾವೃತಗೊಂಡು ವಾಹನ ಸವಾರರಿಗೆ ಆಸಹನೀಯ ಸ್ಥಿತಿ ಉಂಟಾಗಿತ್ತು.