ಸಿದ್ದರಾಮಯ್ಯ ಪಕ್ಕ ಲಕ್ಷ್ಮಣ ಸವದಿ

ಜಗದೀಶ್ ಶೆಟ್ಟರ್ ಎಪಿಸೋಡ್ ಬಳಿಕ ಎಲ್ಲರ ದೃಷ್ಟಿ ಸವದಿ ಮೇಲಿದೆ. ಆಫ್ ಕೋರ್ಸ್ ನಿನ್ನೆ ದೆಹಲಿಯಲ್ಲೇ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದರು. ಬಿಜೆಪಿ ನಾಯಕರು ಗಾಳ ಹಾಕುತ್ತಿರುವ ಕಾರಣಕ್ಕೆ ಸವದಿಯನ್ನು ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ತಮ್ಮ ಹತ್ತಿರದಲ್ಲೇ ಕೂರಿಸಿಕೊಂಡಿದ್ದರೆ ಆಶ್ಚರ್ಯವಿಲ್ಲ.