ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಬಾಗಲಕೋಟೆ ರೈಲು ನಿಲ್ದಾಣವು ಅಮೃತ ಭಾರತ್ ಯೋಜನೆಯಡಿ 16.06 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದೆ. ನವೀಕರಿಸಿದ ನಿಲ್ದಾಣವು ಆಧುನಿಕ ಸೌಕರ್ಯಗಳಾದ ಲಿಫ್ಟ್, ಎಸ್ಕಲೇಟರ್, ವಿಶಾಲವಾದ ಕಾಯುವ ಕೊಠಡಿಗಳು, ಮತ್ತು ಸುಸಜ್ಜಿತ ಶೌಚಾಲಯಗಳನ್ನು ಹೊಂದಿದೆ. ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಕಲೆಗಳು ಮತ್ತು ಸೌರಶಕ್ತಿ ಘಟಕಗಳನ್ನು ಸಹ ಅಳವಡಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ನವೀಕರಿಸಿದ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.