ಇಂದು ಬೆಳಗ್ಗೆ ಬೀದರ್ ನಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ ಹಾವೇರಿ ಜಿಲ್ಲೆಯ ತಡಸ ಕ್ರಾಸ್ ಬಳಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು, ಅಲ್ಲಿಂದ ಅವರು ಗಜೇಂದ್ರಗಡಕ್ಕೆ ಬಂದಿದ್ದಾರೆ. ಇಲ್ಲಿಂದ ಅವರು ಪ್ರಾಯಶಃ ಹುಬ್ಬಳ್ಳಿಗೆ ಹೋಗಬಹುದು. ಕಳೆದ ವಾರ ಬರ್ಬರವಾಗಿ ಹತ್ಯೆಯಾದ ನೇಹಾ ಹಿರೇಮಠ ಮನೆಗೆ ಹೋಗಿ ಅಕೆಯ ತಂದೆ ತಾಯಿಯನ್ನು ಮಾತಾಡಿಸುವುದು ನಿಗದಿಯಾಗಿದೆ.