ಮಹೇಶ್ ಕುದುರೆ ಹತ್ತಿ ಹೊರಟರೆ ಚಿಂಟು ಒಂದು ಕುರಿಯ ಬೆನ್ನೇರಿ ಅವರನ್ನು ಹಿಂಬಾಲಿಸುತಿತ್ತು. ಕುರಿ ಬೆನ್ನ ಮೇಲೆ ಚಿಂಟು ಇರುವಂಥ ವಿಗ್ರಹವನ್ನು ಮಹೇಶ್ ತಮ್ಮ ತೋಟದ ಮನೆಯಲ್ಲಿ ಕೆತ್ತಿಸಿ ಇಟ್ಟಿದ್ದಾರೆ. ಇವತ್ತಿನ ದಿನ ಮೂರ್ತಿಗೆ ಹೋಮ ಹವನ ಮತ್ತು ಪೂಜೆಯನ್ನು ಅವರು ಮಾಡಿಸುತ್ತಾರೆ. ಅಂದಹಾಗೆ ಈ ವಿಗ್ರಹವನ್ನು ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಒಂದು ರೂಪಾಯಿ ಸಂಭಾವನೆ ಕೂಡ ತೆಗೆದುಕೊಳ್ಳದೆ ಕೆತ್ತಿದ್ದಾರೆ.