ಕುಮಾರಸ್ವಾಮಿಯವರನ್ನು ಮಾತಾಡಿಸಿ ಹೊರಬಂದ ಬಳಿಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಯೋಗೇಶ್ವರ್, ಮೂರು ದಶಕಗಳಿಂದ ಕುಮಾರಸ್ವಾಮಿ ಅವರೊಂದಿಗೆ ರಾಜಕೀಯ ವೈರತ್ವ ಇರೋದು ನಿಜ, ಆದರೆ ವೈಯಕ್ತಿಕವಾಗಿ ತಮ್ಮ ನಡುವೆ ಯಾವುದೇ ವೈಷಮ್ಯ ಇಲ್ಲ ಎಂದರು. ಅವರ ಆರೋಗ್ಯ ಸುಧಾರಿಸಿದೆ, ಲವಲವಿಕೆಯಿಂದ ಮಾತಾಡಿದರು ಎಂದು ಯೋಗೇಶ್ವರ್ ಹೇಳಿದರು.