ಬಸನಗೌಡ ಪಾಟೀಲ್ ಯತ್ನಾಳ್ ತಾನು ಹಿಟ್ ಅಂಡ್ ರನ್ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ನಿನ್ನೆ ಟಿವಿ9 ಜೊತೆ ಮಾತಾಡುವಾಗ ಎಲ್ಲ ದಾಖಲೆಯಿಟ್ಟುಕೊಂಡು ಮಾತಾಡುತ್ತಿರುವುದಾಗಿ ಹೇಳಿದ್ದ ಅವರು, ತನ್ವೀರ್ ಪೀರಾ ಎಸೆದಿರುವ ಸವಾಲಿನ ಬಗ್ಗೆ ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ತಿಳಿಸಿದಾಗ ಅಕ್ಷರಶಃ ಪಲಾಯನಗೈದರು. ಅವರೊಂದಿಗೆ ನಿಂತು ಮಾತಾಡುವ ವ್ಯವಧಾನ ಕೂಡ ಅವರು ತೋರಲಿಲ್ಲ. ಆರೋಪ ಸಾಬೀತಾದರೆ ದೇಶ ತೊರೆಯುತ್ತೇನೆ, ಇಲ್ಲದಿದ್ದರೆ ಯತ್ನಾಳ್ ರಾಜಕಾರಣ ಬಿಡ್ತಾರೆಯೇ ಅಂತ ಪೀರಾ ಕೇಳಿದ್ದಾರೆ.