ಆಗಿನ ಮೈಸೂರು ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಮಾತು ಹಾಗಿರಲಿ, ಖುದ್ದು ಮಲ್ಲಿಕಾರ್ಜುನ ಅವರು ಲ್ಯಾಂಡ್ ಕನ್ವರ್ಷನ್ ಆಗುವ ದಿನಾಂಕದಂದು ಸ್ಥಳದಲ್ಲಿ ಹಾಜರಿರಲಿಲ್ಲ. ಕನ್ವರ್ಷನ್ ಪ್ರಕ್ರಿಯೆ ನಡೆಯುವಾಗ ಅಧಿಕಾರಿಗಳು, ಸರ್ವೇಯರ್ ಮತ್ತು ಕಂದಾಯ ನಿರೀಕ್ಷರ ಜೊತೆ ಜಮೀನಿನ ಮಾಲೀಕ ಸ್ಥಳದಲ್ಲಿ ಹಾಜರಿದ್ದು ಮಹಜರ್ ಮತ್ತು ಪಂಚನಾಮೆಯನ್ನು ವೀಕ್ಷಿಸಬೇಕಾಗುತ್ತದೆ ಎಂದು ಗಂಗರಾಜು ಹೇಳುತ್ತಾರೆ.