ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು, ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಗದಗ ಜಿಲ್ಲೆ ಮುಂಡರಗಿ ಹೊರವಲಯದಲ್ಲಿನ ಗೋದಾಮಿನಲ್ಲಿ ನಡೆದಿದೆ. ಗರ್ಭಿಣಿಯರು, ಮಕ್ಕಳಿಗೆ ನೀಡಬೇಕಿದ್ದ ನೂರಾರು ಕ್ವಿಂಟಾಲ್​ ಅಕ್ಕಿ, ಗೋಧಿ, ಪೌಷ್ಟಿಕ ಆಹಾರ ನಾಶವಾಗಿದೆ. ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹಾಳಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ MSPC ರದ್ದು ಮಾಡಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಅಂತ ಒತ್ತಾಯಿಸಿದ್ದಾರೆ.