ರಾಜ್ಯದ ಕಾಂಗ್ರೆಸ್ ಸರಕಾರ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಜೊತೆ ಮಾತಾಡಲಿ ಎಂದು ಹೇಳುವ ರಾಜ್ಯದ ಬಿಜೆಪಿ ನಾಯಕರು ಒಂದು ನಿಯೋಗ ರಚಿಸಿಕೊಂಡು ಪ್ರಧಾನಿಯವರನ್ನು ಯಾಕೆ ಭೇಟಿಯಾಗಬಾರದು ಎಂದು ಇಬ್ರಾಹಿಂ ಕೇಳಿದರು. ಅಸಲು ವಾಸ್ತವಾಂಶವೇನೆಂದರೆ, ರಾಜ್ಯದಲ್ಲಿ ಬಿಜೆಪಿ ನಿಶಕ್ತಗೊಂಡಿದೆ ಮತ್ತು ರಾಜ್ಯದಲ್ಲಿ ಅದರ ನಾಯಕರು ಸಹ ದುರ್ಬಲರು, ಹಾಗಾಗೇ ಅವರು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಇಬ್ರಾಹಿಂ ಹೇಳಿದರು.