ಅರಣ್ಯಾಧಿಕಾರಿಯ ಹೇಳಿಕೆ

ಬನ್ನೇರುಘಟ್ಟ ಅನಿಮಲ್ ರೆಸ್ಕ್ಯೂ ಸೆಂಟರ್ ನಲ್ಲಿರುವ ಪೋಸ್ಟ್ ಮಾರ್ಟಂ ರೂಮಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತ ಚಿರತೆ ಇಂದು ಬೆಳಗ್ಗೆ ಕಾರ್ಯಾಚರಣೆ ತಂಡದ ಭಾಗವಾಗಿದ್ದ ಅರವಳಿಕೆ ಡಾ ಕಿರಣ್ ಹಾಗೂ ಒಬ್ಬ ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿತ್ತು. ಅಕ್ಟೋಬರ್ 28 ರಂದು ಬೆಳಗಿನ ಜಾವ ಈ ಚಿರತೆ ಸಿಂಗಸಂದ್ರದ ಅಪಾರ್ಟ್ಮೆಂಟ್ ಒಂದರಲ್ಲಿ ಓಡಾಡಿದ ದೃಶ್ಯ ಅಲ್ಲಿನ ಸಿಸಿಟಿವಿ ಗಳಲ್ಲಿ ಸೆರೆಯಾಗಿತ್ತು.