ನಿನ್ನೆ ಮುಡಾ ಸೈಟು ಹಂಚಿಕೆ ಹಗರಣದ ಬಗ್ಗೆ ಮುಖ್ಯಮಂತ್ರಿ ಪರ ಸುದ್ದಿಗೋಷ್ಟಿ ನಡೆಸಿದ ಅವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣರನ್ನು ಕುಮಾರಸ್ವಾಮಿ ತಿವಿದರು. ಹಿಂದೆ ಸಹಾಯಕ ಅಡ್ವೋಕೇಟ್ ಜನರಲ್ ಆಗಿದ್ದ ಮತ್ತು ಈಗ ಶಾಸಕರಾಗಿರುವವರು ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿ ಏನೇನೋ ಹೇಳಿದ್ದನ್ನು ಗಮನಿಸಿದ್ದೇನೆ, ಕಾದು ನೋಡೋಣ ಮುಂದೇನಾಗುತ್ತೆ ಅಂತ ಕೇಂದ್ರ ಸಚಿವ ಹೇಳಿದರು.