ಈ ವಿಡಿಯೋ ಸುದ್ದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಂಬಂಧಪಟ್ಟ ಕೆಎಸ್ಸಾರ್ಟಿಸಿ ಅಧಿಕಾರಿಗಳು ಬಹಳ ಸೂಕ್ಷ್ಮವಾಗಿ ಗಮನಿಸಬೇಕಿದೆ. ಇದೇ ಚಾಲಕನ ಹಾಗೆ ಮೊಬೈಲ್ ಉಪಯೋಗಿಸುತ್ತ ವಾಹನ ಓಡಿಸುವ ಅನೇಕ ಚಾಲಕರು ಸಿಗುತ್ತಾರೆ. ಅವರ ಉಡಾಫೆ ಮನೋಭಾವಕ್ಕೆ ಇಲಾಖೆ ಶಿಸ್ತಿನ ಕ್ರಮ ಜರುಗಿಸಬೇಕಿದೆ. ಅನಾಹುತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವುದರಲ್ಲಿ ಅರ್ಥವಿಲ್ಲ.