ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಶಿಫಾರಸ್ಸು ಮಾಡುವ ಆಫರ್ ನೊಂದಿಗೆ ಸುಮಾರು 6 ತಿಂಗಳ ಹಿಂದೆ ತನ್ನ ಜೊತೆ ಸಂಧಾನ ಮಾಡಿಕೊಳ್ಳಲು ಪಕ್ಷದ ನಾಯಕರಾದ ಎನ್ ರವಿಕುಮಾರ್, ವೀರಣ್ಣ ಚರಂತಿಮಠ ಮತ್ತು ಅಭಯ್ ಪಾಟೀಲ್ ರನ್ನು ತನ್ನಲ್ಲಿಗೆ ವಿಜಯೇಂದ್ರ ಕಳಿಸಿದ್ದರು. ಅದರೆ ಆಫರ್ ನಿರಾಕರಿಸಿ ಆ ಹುದ್ದೆಗೆ ವಿಜಯೇಂದ್ರನೇ ಲಾಯಕ್ಕು ಎಂದಿದ್ದೆ ಎಂದು ಯತ್ನಾಳ್ ಹೇಳಿದರು.