ಬೆಂಗಳೂರಿನ ಜಯನಗರದಲ್ಲಿ ಸ್ಕೂಟರ್‌ ಕಳ್ಳತನ ನಡೆದಿದ್ದು ಹೀಗೆ

ಟೂ ವ್ಹೀಲರ್‌ ಮಾಲೀಕರೇ ಎಚ್ಚರ. ನೀವು ಗಾಡಿ ನಿಲ್ಲಿಸುವಾಗ ಲಾಕ್‌ ಆಗಿದ್ಯಾ ಅಂತ ಒಮ್ಮೆ ನೋಡಿ ಕೊಳ್ಳಿ. ಇಲ್ಲವಾದರೆ ನಿಮ್ಮ ಗಾಡಿ ಅಬೇಸ್‌ ಆಗೋ ಚಾನ್ಸ್ ಇದೆ. ಏಕೆಂದ್ರೆ, ಬೆಂಗಳೂರಿನ ಜಯನಗರ ನಿವಾಸಿಯೊಬ್ಬರು ಲಾಕ್‌ ಮಾಡದ ಗಾಡಿಯನ್ನು ಕಳ್ಳನೊಬ್ಬ ಕಳವು ಮಾಡಿ ಪರಾರಿಯಾಗಿದ್ದಾನೆ. ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ ಜಾಸ್ತಿ ಆಗ್ಬಿಟ್ಟಿದೆ. ರಾತ್ರಿ ವೇಳೆ ಕಳವು ಮಾಡ್ತಿದ್ದ ಕಳ್ಳರು ಈಗ ಬೆಳಗಿನ ಹೊತ್ತಿನಲ್ಲಿಯೇ ದ್ವಿಚಕ್ರವಾಹನವನ್ನು ಹೊತ್ತು ಹೋಗುತ್ತಿದ್ದಾರೆ. ಜಯನಗರದಲ್ಲಿ ಮನೆ ಮುಂದೆ ನಿಂತಿದ್ದ ಸ್ಕೂಟರ್‌ ಅನ್ನು ಕಳ್ಳ ಕಳವು ಮಾಡಿದ್ದಾನೆ. ಸ್ಕೂಟರ್‌ ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.