ರಾಜ್ಯ ಬಿಜೆಪಿಯಲ್ಲಿ ಒಳಜಗಳಗಳು ಜೋರಾಗಿ ನಡೆಯುತ್ತಿವೆ, ಇವತ್ತು ಮಾಜಿ ಸಚಿವ ಬಿ ಶ್ರೀರಾಮುಲು ಮತ್ತು ಅವರ ಖಾಸಾ ಗೆಳೆಯ ಗಾಲಿ ಜನಾರ್ಧನರೆಡ್ಡಿ ನಡುವೆ ಕಿತ್ತಾಟ ಶುರುವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿವೈ ವಿಜಯೇಂದ್ರ ನಡುವಿನ ಜಗಳ ಬೇರೆ ಗ್ರಹದವರಿಗೂ ಗೊತ್ತಾಗಿದೆ. ಕೆಲ ಹಿರಿಯ ಬಿಜೆಪಿ ನಾಯಕರೂ ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರೋದು ಗೊತ್ತಾಗುತ್ತಿದೆ.