ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಬಸ್ತಿಪುರ ಅರಣ್ಯ ಪ್ರದೇಶವಿದೆ ಮತ್ತು ಶ್ರೀರಂಗಪಟ್ಟಣದಿಂದ ಮಾಂಸ ಮತ್ತು ಮಾಂಸತ್ಯಾಜ್ಯವನ್ನು ತಂದು ಇಲ್ಲಿ ಎಸೆಯಲಾಗುತ್ತದೆ, ಅದನ್ನು ತಿನ್ನಲು ಬರುವ ನಾಯಿಗಳ ಬೇಟೆಗೆ ಚಿರತೆ ಬಂದಿರಬಹುದು ಎಂದು ಅಧಿಕಾರಿ ಹೇಳುತ್ತಾರೆ. ಚಿರತೆ ಒಂದು ಪಕ್ಷ ಕಣ್ಣಿಗೆ ಬಿದ್ದರೆ ಸಾರ್ವಜನಿಕರು ಆತಂಕಕ್ಕೊಳಗಾಗದೆ 1926 ನಂಬರ್ ಗೆ ಕಾಲ್ ಮಾಡಲು ಅವರು ಹೇಳುತ್ತಾರೆ.