ಇದೇನು ಮಂಗಳೂರು ಅಧಿವೇಶನವಾ: ತಮಾಷೆ ಮಾಡಿದ ಆರ್. ಅಶೋಕ್

ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದರು. ತುಳು ಭಾಷೆಯಲ್ಲೇ ಶಾಸಕ ಅಶೋಕ್ ರೈ ಮಾತನಾಡಿದ್ದಾರೆ. ನನಗೆ ಏನೂ ಅರ್ಥ ಆಗಿಲ್ಲ ಎಂದು ಸ್ಪೀಕರ್ ಖಾದರ್​ ಹೇಳಿದ್ದಾರೆ. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್​ ಇದೇನು ಮಂಗಳೂರು ಅಧಿವೇಶನವಾ ಎಂದು ತಮಾಷೆ ಮಾಡಿದ್ದಾರೆ.