ಅಧಿಕಾರಿಯನ್ನು ಕರೆಯುವ ಪ್ರಯತ್ನದಲ್ಲಿ ಇನ್ನೊಬ್ಬ ಅಧಿಕಾರಿ ವಿಫಲರಾಗುತ್ತಾರೆ. ಹಾಗಾಗೇ, ಪರಮೇಶ್ವರ್ ತಾಳ್ಮೆ ಕಳೆದುಕೊಳ್ಳಲಾರಂಭಿಸಿರುತ್ತಾರೆ. ಅನುಪಸ್ಥಿತ ಅಧಿಕಾರಿಯ ಪರವಾಗಿ ವೇದಿಕೆಯ ಮೇಲಿದ್ದ ಅಧಿಕಾರಿ ಏನೋ ಸಮಜಾಯಿಷಿ ನೀಡಲು ಪ್ರಯತ್ನಿಸಿದಾಗ ಸಚಿವರಿಗೆ ರೇಗುತ್ತದೆ. ಎಲ್ಲರೆದುರೇ ಅಧಿಕಾರಿಗೆ ‘ವ್ಹಾಟ್ ನಾನ್ಸೆನ್ಸ್ ಆರ್ ಯೂ ಟಾಕಿಂಗ್!’ ಅಂತ ಗದರುತ್ತಾರೆ.