ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಿಧಿ

ಕನ್ನಡಿಗರಲ್ಲಿ ಎದ್ದಿರುವ ಪ್ರಶ್ನೆಯೇನೆಂದರೆ, ಇಂಥ ಪ್ರತಿಜ್ಞಾ ವಿಧಿಗಳಿಂದ ಭ್ರಷ್ಟಚಾರ ಹೋಗಲಾಡಿಸುವುದದು ಸಾಧ್ಯವೇ? ಜನಸಾಮಾನ್ಯನೊಬ್ಬ ತಾಲ್ಲೂಕು ಕಚೇರಿ, ತಹಸೀಲ ಕಚೇರಿ ಅಥವಾ ಯಾವುದೇ ಇಲಾಖೆಯ ಕಚೇರಿಯನ್ನು ನೀವು ಹೆಸರಿಸಿ-ಲಂಚ ನೀಡದೆ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲಾಗದು. ಕಚೇರಿಗಳಲ್ಲಿ ಗುಮಾಸ್ತನಿಂದ ಹಿಡಿದು ಮೇಲಧಿಕಾರಿಯವರಿಗೆ ಭ್ರಷ್ಟರು. ಎಲ್ಲರೂ ಒಂದೇ ದೋಣಿಯ ಪಯಣಿಗರಾಗಿರುವುದರಿಂದ ಯಾರನ್ನು ದೂರುತ್ತೀರಿ?