ಕಲಬುರಗಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್

ಹುಟ್ಟಿಸಿದವ ಮಾತ್ರ ನಮಗೆ ಅಪ್ಪಾಜಿ ಆಗುತ್ತಾನೆ, ಬೇರೆಯವರೆಲ್ಲ ಯಾಕಾಗುತ್ತಾರೆ ಎಂದ ಯತ್ನಾಳ್, ತಾನು ಎಲ್ ಕೆ ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಿಟ್ಟರೆ ಬೇರೆ ಯಾರ ಕಾಲಿಗೆ ಬಿದ್ದಿಲ್ಲ ಅಂತ ಹೇಳಿದರು. ಒಂದಷ್ಟು ಜನರನ್ನು ಬೆನ್ನಿಗೆ ಕಟ್ಟಿಕೊಂಡು ತಾನು ಸಮಾಜದ ಉದ್ಧಾರಕ ಎಂದು ಹೇಳುವವ ನಾಯಕ ಅನಿಸಿಕೊಳ್ಳಲಾರ, ಲಿಂಗಾಯತರಲ್ಲಿ ಯಾವುದೇ ಉಪಜಾತಿಗಳಿಲ್ಲ, ಲಿಂಗಾಯತರೆಲ್ಲ ಒಂದೇ ಎಂದು ಅವರು ಹೇಳಿದರು.