ತನಿಖೆಯಲ್ಲಿ ತಮ್ಮ ಗುತ್ತಿಗೆದಾರರ ಸಂಘದ ಸದಸ್ಯನ ತಪ್ಪಿದೆ ಅಂತ ಗೊತ್ತಾದರೆ ತನಿಖಾ ಸಂಸ್ಥೆ ನೀಡುವ ಶಿಕ್ಷೆಯನ್ನು ಅಂಗೀಕರಿಸುತ್ತೇವೆ ಎಂದು ಕೆಂಪಣ್ಣ ಹೇಳಿದರು. ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ 40 ಪರ್ಸೆಂಟ್ ಕಮೀಶನ್ ಆರೋಪಕ್ಕೆ ತಾವು ಈಗಲೂ ಬದ್ಧರಾಗಿರುವುದಾಗಿ ಹೇಳಿದ ಕೆಂಪಣ್ಣ, ಒಬ್ಬ ನಿವೃತ್ತ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದರೆ ಅದರ ಮುಂದೆ ಮಾಡಿದ ಎಲ್ಲ ಆರೋಪಗಳಿಗೆ ಸಾಕ್ಷ್ಯ ಒದಗಿಸುವುದಾಗಿ ಕೆಂಪಣ್ಣ ಹೇಳಿದರು.