ಬಾಗಲಕೋಟೆಯಲ್ಲಿ ಬಿವೈ ವಿಜಯೇಂದ್ರ

ಪ್ರಧಾನಿ ಮೋದಿಯವರ ಹೊಸಪೇಟೆ ಸಭೆಯಲ್ಲಿ ತಾನು ಭಾಗಿಯಾಗಿದ್ದೆ, ಅಲ್ಲಿ ಅವರು ಸುಮಾರು ಒಂದು ಗಂಟೆ ಕಾಲ ಮಾತಾಡಿದರು ಮತ್ತು ಆಯಾಸದ ಲವಲೇಶವೂ ಅವರ ಮುಖದಲ್ಲಿ ಕಾಣಲಿಲ್ಲ ಎಂದು ವಿಜಯೇಂದ್ರ ಹೇಳಿದರು. ಎಲ್ಲ ಸಭೆಗಳು ಯಶ ಕಂಡಿವೆ ಮತ್ತು ಜನರ ಉತ್ಸಾಹ ಮತ್ತು ಪ್ರತಿಕ್ರಿಯೆ ನೋಡಿ ಮೋದಿಯವರೇ ಸಂತೃಪ್ತಿ ವ್ಯಕ್ತಪಡಿಸಿದರು ಎಂದು ಹೇಳಿದ ವಿಜಯೇಂದ್ರ ಎಲ್ಲರಲ್ಲೂ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ನೋಡುವ ಮಹದಾಸೆ ಇದೆ ಎಂದರು.