ಸಾರ್ವಜನಿಕವಾಗಿ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಬಗ್ಗೆ ಮಾತಾಡಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದರೂ ರಾಜಣ್ಣ ಮಾತಾಡುವುದನ್ನು ಬಿಡುತ್ತಿಲ್ಲ. ಮುಖ್ಯಮಂತ್ರಿಯವರು ಗದರಿ ಹೇಳಿದ್ದಾರೋ ಅಥವಾ ಭುಜತಟ್ಟಿ ಹೇಳಿದ್ದಾರೋ ಅನ್ನೋದು ಗೊತ್ತಾಗುತ್ತಿಲ್ಲ, ರಾಜಣ್ಣ ಆಡುವ ಮಾತು ಅಂಥ ಗೊಂದಲ ಮೂಡಿಸುತ್ತದೆ.