ಜಮೀರ್ ಅಹ್ಮದ್ ಖಾನ್ ವಸತಿ ಸಚಿವರು ಮತ್ತು ಅವರ ಇಲಾಖೆಯಲ್ಲೇ ದೊಡ್ಡ ಹಗರಣ ನಡೆದಿದೆ, ಮನೆಗಳ ಹಂಚಿಕೆಯಲ್ಲಾಗಿರುವ ಭ್ರಷ್ಟಾಚಾರ ತನಗೆ ಸಂಬಂಧವಿಲ್ಲ ಅಂತ ಮಂತ್ರಿಯೇ ಹೇಳಿದರೆ ಹೇಗೆ? ಇಂಥ ಬೇಜವಾಬ್ದಾರಿ ಸಚಿವ ಮತ್ತು ಸರ್ಕಾರವನ್ನು ಮೊದಲ್ಯಾವತ್ತೂ ನೋಡಿರಲಿಲ್ಲ, ಬಿಅರ್ ಪಾಟೀಲ್ ಅರೋಪ ಮಾಡಿ 15 ದಿನ ಕಳೆದರೂ ಒಬ್ಬೇಒಬ್ಬ ಅಧಿಕಾರಿಯನ್ನು ಟ್ರಾನ್ಸ್ಫರ್ ಮಾಡುವ ಕೆಲಸ ನಡೆದಿಲ್ಲ ಎಂದು ಬೊಮ್ಮಾಯಿ ಹೇಳಿದರು.