ಮೊನ್ನೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರನ್ನು ದೆಹಲಿಗೆ ಕರೆಸಿ ಮೂರು ದಿನಗಳವರೆಗೆ ಅವರೊಂದಿಗೆ ಮಾತು ಕೂಡ ಆಡದೆ ವಾಪಸ್ಸು ಕಳಿಸಿದ್ದು ರಾಜ್ಯ ನಾಯಕರಿಗೆ ಯಾವ ಗೌರವ ಇದೆ ಅನ್ನೋದು ಗೊತ್ತಾಗುತ್ತದೆ ಎಂದು ಶೆಟ್ಟರ್ ಹೇಳಿದರು. ಆದರೆ ಹಿರಿಯರನ್ನು ಕಡೆಗಣಿಸಿದರೆ ಏನಾಗುತ್ತದೆ ಅನ್ನೋದು ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಗೊತ್ತಾಗಿದೆ ಅಂತ ಅವರು ಹೇಳಿದರು