ರಮೇಶ್ ಕುಮಾರ್ ಅವರ ಅರಣ್ಯ ಭೂಮಿ ವಿವಾದದ ಜಂಟಿ ಸರ್ವೆ ಎರಡು ದಿನಗಳ ಕಾಲ ನಡೆದು ಪೂರ್ಣಗೊಂಡಿದೆ. ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಒಮ್ಮತವಿಲ್ಲ. ಕಂದಾಯ ಇಲಾಖೆ ಸ್ಥಿತಿಗತಿ ಸರಿಯಿದೆ ಎಂದರೆ, ಅರಣ್ಯ ಇಲಾಖೆ 1937 ಮತ್ತು 1944ರ ನೋಟಿಫಿಕೇಶನ್ಗಳನ್ನು ಉಲ್ಲೇಖಿಸಿದೆ. ವಿವಿಧ ವಿಧಾನಗಳಿಂದ ಸರ್ವೆ ನಡೆಸಲಾಗಿದೆ. ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು.