ನಿಜಾಮಾಬಾದ್ ಜಿಲ್ಲೆಯ ಅರ್ಮೂರ್ ನಲ್ಲಿ ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ತೆರಳುವಾಗ ವಾಹನದ ಮೇಲೆ ನಿಂತಿದ್ದ ರಾಮರಾವ್ ಮತ್ತು ರೆಡ್ಡಿ ಅದಕ್ಕೆ ಕಟ್ಟಿದ್ದ ಬ್ಯಾರಿಕೇಡ್ ಸಡಿಲಗೊಂಡು ಕಿತ್ತು ಬಂದ ಕಾರಣ ಉರುಳಿ ಬಿದ್ದಿದ್ದಾರೆ. ಅವರಿಬ್ಬರೊಂದಿಗೆ ಬೇರೆ ಕೆಲವರು ಸಹ ಉರುಳಿ ಬೀಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅದೃಷ್ಟವಶಾತ್ ಬಿದ್ದವರೆಲ್ಲ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.