ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್

ಸಚಿವ ಸುರೇಶ್ ಮಾತಾಡುವಾಗ ಮುಡಾ ಅಧ್ಯಕ್ಷ ಕೆ ಮರಿಗೌಡ ಪ್ರತಿಯೊಂದು ಮಾತಿಗೂ ಮೂಗು ತೂರಿಸುತ್ತಾ ಅವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರು. ಅವರ ಕಾಟ ವಿಪರೀತವಾದಾಗ ಎಲ್ಲರ ಮುಂದೆಯೇ ಅಸಮಾಧಾನ ವ್ಯಕ್ತಪಡಿಸುವ ಸುರೇಶ್ ಸ್ವಲ್ಲ ಸಮ್ಮನಿರ್ತೀರಾ ಗೌಡ್ರೆ? ನಾನು ಮಾತಾಡ್ತೀದ್ದೀನಲ್ಲ? ನಂಗೆ ಮಾತಾಡಲು ಬಿಡಿ ಅನ್ನುತ್ತಾರೆ. ಇಂಗು ತಿಂದ ಮಂಗನಂತಾಗುವ ಮರಿಗೌಡ ಅದನ್ನು ಮುಚ್ಚಿಕೊಳ್ಳಲು ದೇಶಾವರಿ ನಗೆ ಬೀರುತ್ತಾರೆ.