ಎಸ್ ಎಲ್ ಭೋಜೇಗೌಡ, ವಿಧಾನ ಪರಿಷತ್ ಸದಸ್ಯ

ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಿಖಿಲ್ ಕುಮಾರಸ್ವಾಮಿ ಸೋತರೂ 2019ರಲ್ಲಿ ಗೆದ್ದಿದ್ದ ಪುಟ್ಟಸ್ವಾಮಿ ಅವರಿಗಿಂತ ಸುಮಾರು 70,000 ವೋಟು ಹೆಚ್ಚು ಪಡೆದಿದ್ದರು ಎಂದರು. ಜೆಡಿಎಸ್ ಗೆ ಯಾವ್ಯಾವ ಕ್ಷೇತ್ರಗಳು ಬಿಟ್ಟುಕೊಡಬೇಕೆಂದು ಪಕ್ಷದ ವರಿಷ್ಠರು ಬಿಜೆಪಿ ನಾಯಕರ ಜೊತೆ ಇನ್ನೂ ಮಾತಾಡಿಲ್ಲ, ಆದರೆ ಪಕ್ಷಕ್ಕೆ ಭದ್ರಕೋಟೆ ಅನಿಸಿರುವ ಕ್ಷೇತ್ರಗಳಿಗಾಗಿ ಬೇಡಿಕೆಯಂತೂ ಸಲ್ಲಿಸಲಾಗುವುದು ಎಂದು ಭೋಜೇಗೌಡ ಹೇಳಿದರು.