ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ: ಪರಮೇಶ್ವರ್

ಜಮ್ಮು ಮತ್ತು ಕಾಶ್ಮೀರದ ಪಹಲ್​​ಗಾಮ್​​ನಲ್ಲಿ ನಡೆದ ಉಗ್ರ ದಾಳಿ ಅತ್ಯಂತ ಭೀಕರವಾದದ್ದು ಮತ್ತು ಪುಲ್ವಾಮಾ ದಾಳಿ ನಂತರದಲ್ಲೇ ಅತಿದೊಡ್ಡದು. ಇದಕ್ಕೆ ಕಾರಣವಾದ ಉಗ್ರ ಸಂಘಟನೆ ವಿರುದ್ಧ ಕೇಂದ್ರ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.