ದರ್ಶನ್​ ಮೇಲಿರುವ ಕೊಲೆ ಆರೋಪದ ಬಗ್ಗೆ ಆಪ್ತ ಗೆಳೆಯ ತರುಣ್​ ಸುಧೀರ್​ ಮೊದಲ ಮಾತು

ನಟ ದರ್ಶನ್​ ಅವರ ಜೊತೆ ಆಪ್ತ ಒಡನಾಟ ಹೊಂದಿರುವ ತರುಣ್​ ಸುಧೀರ್​ ಅವರು ಇದೇ ಮೊದಲ ಬಾರಿಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ವರ್ಷಗಳಿಂದ ದರ್ಶನ್​ ಮತ್ತು ತರುಣ್​ ಸುಧೀರ್​ ಕುಟುಂಬದ ನಡುವೆ ಆತ್ಮೀಯತೆ ಇದೆ. ಈಗ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ಆ ಕುರಿತು ತರುಣ್​ ಸುಧೀರ್​ ಭಾವುಕವಾಗಿ ಮಾತನಾಡಿದ್ದಾರೆ.