ಪ್ರಶ್ನೋತ್ತರ ವೇಳೆ ಮುಗಿದ ಬಳಿಕ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು, ಸ್ವಲ್ಪ ತಾಳ್ಮೆಯಿರಲಿ ಎಂದು ಸ್ಪೀಕರ್ ಖಾದರ್ ಹೇಳಿದರೂ, ವಿರೋಧ ಪಕ್ಷದ ನಾಯಕರು ಗಲಾಟೆ ಮುಂದುವರಿಸುತ್ತಾರೆ. ಪ್ರಶ್ನೋತ್ತರ ಅವಧಿಯ ಬಳಿಕ ಚರ್ಚೆಗೆ ಅವಕಾಶ ಕಲ್ಪಿಸುವ ಆಶ್ವಾಸನೆಯನ್ನು ಸ್ಪೀಕರ್ ಅವರಿಂದ ಪಡೆದ ಬಳಿಕ ಬಿಜೆಪಿ ಶಾಸಕರು ಸುಮ್ಮನಾಗುತ್ತಾರೆ.