ಕಾಂಗ್ರೆಸ್ ನವರು ಏನು ಕಿತ್ತಿ ಗುಡ್ಡೆಹಾಕಿದ್ದಾರೆ ಎಂದು ಕುಮರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ರವಿ ಗಣಿಗ, ಅವರು ಸರ್ಕಲ್ಗೆ ಬರಲಿ, ಏನು ಗುಡ್ಡೆ ಹಾಕಿದ್ದೀವಿ ಅನ್ನೋದನ್ನು ತೋರಿಸ್ತೇವೆ, ಗುಡ್ಡೆಗಳನ್ನು ಅವರು ಕೌಂಟ್ ಮಾಡ್ತಾ ಹೋಗಲಿ ಎಂದು ಹೇಳಿ, ತಮ್ಮ ಸರ್ಕಾರ ಸ್ಥಿರವಾಗಿದೆ, 2028ರಲ್ಲಿ ಮತ್ತು 2033ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.