ಕಲಬುರಗಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು (Revenue Minister Krishna Byre Gowda) ಕಲಬುರಗಿ (Kalaburagi) ನಗರದಲ್ಲಿ ಇಂದು (ಜುಲೈ 31) ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಮಳೆ ಹಾನಿ, ಬೆಳೆ ಹಾನಿ, ಕಟ್ಟಡ ಹಾನಿಗಳ ಬಗ್ಗೆ ಕೂಡ ಸರ್ವೆ ಮಾಡಲು ಇಂದು ದಿನಾಂಕ ನಿಗದಿ ಮಾಡುತ್ತೇವೆ. ರಾಜ್ಯದಲ್ಲಿ ಕೆಲವಡೇ ಇನ್ನೂ ಮಳೆಯಾಗುತ್ತಿದೆ. ಹೀಗಾಗಿ ಬೆಳೆ ಹಾನಿ ಸರ್ವೇ ಮಾಡೋದು ಕಷ್ಟಸಾಧ್ಯವಾಗಿದೆ. ಆದರೂ ಒಂದು ವಾರದ ಒಳಗೆ ಬೇಳೆ ಹಾನಿ ಸಮೀಕ್ಷೆ ಪೂರ್ಣ ಮಾಡುತ್ತೇವೆ ಎಂದು ಹೇಳಿದ್ದಾರೆ.