ಹೃದಯಾಘಾತಗಳ ಪ್ರಮಾಣ ಹೆಚ್ಚಿದಂತೆ ಚಿಕಿತ್ಸಾ ವಿಧಾನಗಳ ಬಲವರ್ಧನೆಯಾಗಬೇಕು, ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆ ಕೊಡಿಸದಿದ್ದರೆ ಸಾವಿನ ಪ್ರಮಾಣ ಶೇಕಡ 25ರಷ್ಟಿರುತ್ತದೆ, ವೈದ್ಯರಲ್ಲಿಗೆ ಒಯ್ದು ಕ್ಲಾಟನ್ನು ಕರಗಿಸುವ ಕೆಲಸ ನಡೆದರೆ ಸಾವಿನ ಪ್ರಮಾಣ ಶೇಕಡ 25ರಿಂದ 10ಕ್ಕೆ ಇಳಿಯುತ್ತದೆ, ನಗರ ಪ್ರದೇಶಗಳಲ್ಲಿ ಸ್ಟೆಂಟ್ ಅಳವಡಿಸುವ ಸೌಲಭ್ಯ ಇರುತ್ತದೆ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು, ದೈಹಿಕ ವ್ಯಾಯಾಮಗಳ ಅವಶ್ಯಕತೆ ಬಗ್ಗೆ ಮಕ್ಕಳಿರುವಾಗಲೇ ತಿಳುವಳಿಕೆ ಮೂಡಿಸಬೇಕು ಎಂದು ಡಾ ಮಂಜುನಾಥ್ ಹೇಳಿದರು.