ಪತ್ರಕರ್ತರು ರೇಣುಕಾಚಾರ್ಯ ಅವರನ್ನು ಮಾತಿನಲ್ಲಿ ಸಿಕ್ಕಿಸುತ್ತಾರೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದಿದ್ದಂತೆ, ಅವನ ಹಾಗೆಯೇ ಮಾಜಿ ಶಾಸಕ ಸೋಲೊಪ್ಪಿಕೊಳ್ಳದೆ ತಮ್ಮ ಮಾತು ಮುಂದುವರಿಸುತ್ತಾ, ಬಿಜೆಪಿ ನಾಯಕರು ಕಮಿಟಿ ಮೀಟಿಂಗ್ ಮುಗಿಸಿ ಊಟಕ್ಕೆ ಹೋದರೆ ಅದು ತಪ್ಪಲ್ಲ, ಅದು ಲಂಚ್, ಅದರೆ ಕಾಂಗ್ರೆಸ್ ನಾಯಕರು ಮಾಡುತ್ತಿರೋದು ಡಿನ್ನರ್ ಪಾರ್ಟಿ ಅಲ್ಲ, ಡಿನ್ನರ್ ಪೊಲಿಟಿಕ್ಸ್ ಎನ್ನುತ್ತಾರೆ!