ಇವತ್ತಿನ ವೈದ್ಯರಿಗೆ ಡಾ ಬಿಸಿ ರಾಯ್ ಅವರಂತೆ ಬದುಕು ನಡೆಸುವುದು ಸಾಧ್ಯವಾಗದಿದ್ದರೂ ಅವರ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವ ಪ್ರಯತ್ನವನ್ನಂತೂ ಮಾಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಮಾಜಕ್ಕೆ ವೈದ್ಯರು ನೀಡುವ ಸೇವೆ ಪದಗಳಲ್ಲಿ ಹೇಳಲಾಗದಂಥದ್ದು, ಅವರಿಂದಾಗೇ ನಾವು ಆರೋಗ್ಯದಿಂದಿರುವುದು ಸಾಧ್ಯ ಎಂದು ಅವರು ಹೇಳಿದರು.