ರಸ್ತೆಗುಂಡಿ ಮಾದರಿ ಕೇಕ್ ಕತ್ತರಿಸಿದ ನಿವಾಸಿಗಳು

ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಕೆ ಶಿವಕುಮಾರ್ ರಸ್ತೆಗುಂಡಿಗಳ ಬಗ್ಗೆ ಮಾತಾಡದಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಅಧಿಕಾರಕ್ಕೆ ಬಂದ ಹೊಸತರಲ್ಲಿ ಅವರು ಬೆಂಗಳೂರು ಅಭಿವೃದ್ಧಿಯ ಬಗ್ಗೆ ಜನರಲ್ಲಿ ಹತ್ತು ಹಲವು ಕನಸುಗಳನ್ನು ಹುಟ್ಟಿಸಿದ್ದರು. ಬ್ರ್ಯಾಂಡ್ ಬೆಂಗಳೂರು ಅಂತ ಸಭೆ ನಡೆಸಿ ನಗರದ ಪ್ರತಿಷ್ಠಿರನ್ನು, ಉದ್ಯಮಿ, ಬುದ್ಧಿಜೀವಿಗಳನ್ನು ಕರೆಸಿದ್ದರು. ಇದೆಲ್ಲ ನಡೆದು ವರ್ಷ ಕಳೆದರೂ ರಸ್ತೆಯ ಗುಂಡಿಗಳು ಮುಚ್ಚಿಕೊಳ್ಳದೆ ಅವುಗಳ ಆಳ ಮತ್ತು ವಿಸ್ತಾರ ಹೆಚ್ಚುತ್ತಾ ಸಾಗಿದೆ.