ಡಿಸಿಎಂ ಶಿವಕುಮಾರ್ ಮನೆಗೆ ಇಂದು ಅನಿರೀಕ್ಷಿತ ಅತಿಥಿಗಳ ದಂಡು. ಮೊದಲು ಬಿಜೆಪಿ ಸಂಸದ ಬಿವೈ ರಾಘವೇಂದ್ರ, ನಂತರ ಬಿಜೆಪಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಮತ್ತು ಕೊನೆಯಲ್ಲಿ ರಾಜೇಂದ್ರ. ಶಿವಕುಮಾರ್ ಮತ್ತು ರಾಜಣ್ಣ ನಡುವೆ ಎಣ್ಣೆ ಸೀಗೆಕಾಯಿ ಸಂಬಂಧ, ಸಹಕಾರ ಸಚಿವ ಕೆಪಿಸಿಸಿ ಅಧ್ಯಕ್ಷನಾಗಲು ಪ್ರಯತ್ನ ಮಾಡುತ್ತಿರುವುದು ಮತ್ತು ಹೆಚ್ಚುವರಿ ಡಿಸಿಎಂಗಳು ಬೇಕು ಅಂತ ಹೇಳಿರೋದು ಶಿವಕುಮಾರ್ಗೆ ಸರಿಕಂಡಿಲ್ಲ.