ಸಚಿವರು ಈ ಮಾತುಗಳನ್ನು ಮಾಧ್ಯಮದವರ ಮುಂದೆ ಹೇಳಿ ಸಹಾನುಭೂತಿ ಗಿಟ್ಟಿಸುವ ಪ್ರಯತ್ನ ಮಾಡಿದರೆ ಹೇಗೆ? ವಸ್ತುಸ್ಥಿತಿ ಕನ್ನಡಿಗರಿಗೆ ಗೊತ್ತಿದೆ, ಅದರೆ ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ ಗೊತ್ತಿಲ್ಲ, ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ಆಡುತ್ತಿದೆ. ಹಾಗಾಗಿ ಶಿವಕುಮಾರ್, ಸಿಡಬ್ಲ್ಯುಅರ್ ಸಿ, ಸಿಡಬ್ಲ್ಯುಎಂಎ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಬೇಕಿದೆ.