ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಓರ್ವ ರೈತ ತನ್ನ ಬೆಳೆಗೆ ದೃಷ್ಟಿ ತಾಗಬಾರದೆಂದು ವಿನೂತನ ದಾರಿ ಕಂಡುಕೊಂಡಿದ್ದಾರೆ. ಕಲ್ಮೇಶ್ ಹಾಗೂ ಶಿವಕುಮಾರ ಹಂಚಿನಾಳ ರೈತ ಸಹೋದರರು ತಮ್ಮ ಹೊಲದಲ್ಲಿ ಬೆಳೆದಿರುವ ಎಲೆಕೋಸು ಬೆಳೆಗೆ ದೃಷ್ಟಿ ತಾಗದಿರಲೆಂದು ಗೊಂಬೆ ಬದಲಿಗೆ ಚಿತ್ರನಟಿಯರ ಭಾವಚಿತ್ರ ನೇತು ಹಾಕಿದ್ದಾರೆ.