ಹೆಣ್ಮಕ್ಕಳ ಬಗ್ಗೆ ಡ್ರೋನ್​ ಪ್ರತಾಪ್​ ಹೇಳಿದ ಗಾದೆ ಮಾತು ಕೇಳಿ ಕಾರ್ತಿಕ್​ ಮಹೇಶ್​ ಕಕ್ಕಾಬಿಕ್ಕಿ

ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಡ್ರೋನ್​ ಪ್ರತಾಪ್​ ಅವರ ಬಗ್ಗೆ ಜನರಿಗೆ ಬೇರೆಯದೇ ಭಾವನೆ ಇತ್ತು. ಆದರೆ ದೊಡ್ಮನೆಯಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದ ಬಳಿಕ ಎಲ್ಲರಿಗೂ ಅಭಿಪ್ರಾಯ ಬದಲಾಗುತ್ತಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರ ಮೊದಲ ವಾರದಲ್ಲಿ ಅಳುಮುಂಚಿ ಆಗಿದ್ದ ಪ್ರತಾಪ್​ ಅವರು ನಂತರದ ದಿನಗಳಲ್ಲಿ ಸಖತ್​ ಆ್ಯಕ್ಟೀವ್​ ಆದರು. ಮಾತಿನ ನಡುನಡುವೆ ಅವರು ಗಾದೆ ಮಾತುಗಳನ್ನು ಬಳಸುತ್ತಾರೆ. ‘ಮೂರು ಹೆತ್ತವಳು ಆರು ಹೆತ್ತವಳಿಗೆ ಹೇಳೋಕೆ ಬಂದಳಂತೆ’ ಎಂದು ಡ್ರೋನ್​ ಪ್ರತಾಪ್​ ಹೇಳಿದಾಗ ಕಾರ್ತಿಕ್​ ಮಹೇಶ್​ಗೆ ಅರ್ಥ ಆಗಲಿಲ್ಲ. ಆ ಗಾದೆಯನ್ನು ಸಂದರ್ಭ ಸಹಿತವಾಗಿ ವಿವರಿಸಲು ಡ್ರೋನ್​ ಪ್ರತಾಪ್​ ಮುಂದಾದಾಗ ಕಾರ್ತಿಕ್​ ಕಕ್ಕಾಬಿಕ್ಕಿ ಆದರು. ಆ ಕ್ಷಣದ ವಿಡಿಯೋ ಇಲ್ಲಿದೆ. ಪ್ರತಿ ರಾತ್ರಿ 9.30ಕ್ಕೆ ಕಲರ್ಸ್​ ಕನ್ನಡದಲ್ಲಿ ಬಿಗ್​ ಬಾಸ್​ ಎಪಿಸೋಡ್​ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಲೈವ್​ ವೀಕ್ಷಣೆಗೆ ಅವಕಾಶ ಇದೆ.