ತಮ್ಮ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ನಾವು ಏನು ಆಗಿದ್ದೆವು, ಈಗ ಏನಾಗಿದ್ದೇವೆ ಮತ್ತು ಮುಂದೇನಾಗಲಿದ್ದೇವೆ ಎಂಬ ಈ ಮೂರು ಅಂಶಗಳನ್ನು ಅರ್ಥ ಮಾಡಿಕೊಂಡರೆ ನಾವು ಪಡೆಯುವ ಶಿಕ್ಷಣ ಸಾರ್ಥಕವಾದಂತೆಯೇ ಎಂದು ಹೇಳಿದರು.