ಮಾಜಿ ಶಾಸಕ ಬಿ ಶ್ರೀರಾಮುಲು

ಜನಾರ್ಧನರೆಡ್ಡಿಯವರನ್ನು ಬಿಜೆಪಿ ಕರೆತರಲು ಶ್ರೀರಾಮುಲು ಹಿಂದೆ ಪ್ರಯತ್ನ ಮಾಡಿದ್ದು ಸುಳ್ಳಲ್ಲ. ಅದರೆ ಪಕ್ಷದ ವರಿಷ್ಠರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗೇ ಅವರು ಆ ನಿಟ್ಟಿನಲ್ಲಿ ಮುಂದುವರಿಯುವುದು ಇಷ್ಟಪಡಲಿಲ್ಲ. ಬಿಜೆಪಿ ಬಗ್ಗೆ ಇದೇ ಕಾರಣಕ್ಕೆ ರೆಡ್ಡಿಯವರಲ್ಲಿ ತೀವ್ರ ಅಸಮಾಧಾನವಿದೆ ಮತ್ತು ಈ ಹಿನ್ನೆಲೆಯಲ್ಲೇ ಅವರು ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದು.