ಗ್ರಾಮಸ್ಥರು ಹೇಳುವ ಪ್ರಕಾರ ಲಕ್ಷ್ಮಿ ಹೆಬ್ಬಾಳ್ಕರ್ ಜಮೀನನ್ನು ಏಜೆಂಟ್ ಗಳ ಮೂಲಕ ಖರೀದಿಸಿದ್ದಾರಂತೆ ಮತ್ತು ಖರೀದಿಸುವಾಗ ಫ್ಯಾಕ್ಟರಿ ನಿರ್ಮಾಣದ ಸಂಗತಿಯನ್ನು ಅವರಿಗೆ ತಿಳಿಸಿಲ್ಲವಂತೆ. ಗ್ರಾಮದ ಮೂಲಕ ಹರಿಯುತ್ತಿದ್ದ ಹಳ್ಳವೊಂದರ ದಿಕ್ಕನ್ನು ಬದಲಾಯಿಸಿದ್ದು ಸಹ ನಿವಾಸಿಗಳನ್ನು ರೊಚ್ಚಿಗೆಬ್ಬಿಸಿದೆ. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಚಿವೆ ಇನ್ನೊಮ್ಮೆ ಊರಿಗೆ ಬಂದು ಮಾತಾಡುವುದಾಗಿ ಹೇಳಿ ಅಲ್ಲಿಂದ ಹೊರಟರು.