ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳಿಗೆ ನಟ ಶಿವರಾಜ್ಕುಮಾರ್ ರಾಯಬಾರಿಯಾಗಿದ್ದಾರೆ. ಕೆಎಂಎಫ್ ಮನವಿಗೆ ಸ್ಪಂದಿಸಿ ರಾಯಭಾರಿಯಾಗಲು ಶಿವಣ್ಣ ಒಪ್ಪಿದ್ದು, KMF ಅಧ್ಯಕ್ಷ ಭೀಮಾನಾಯ್ಕ್, ಎಂಡಿ ಜಗದೀಶ್ ಮನವಿಗೆ ಸ್ಪಂದಿಸಿ ನಂದಿನಿಗೆ ಹೆಗಲು ಕೊಟ್ಟಿದ್ದಾರೆ. TV9 ಜೊತೆ ಮಾತನಾಡಿದ ಶಿವಣ್ಣ ನಂದಿನಿ ಹಾಲಿನ ರಾಯಬಾರಿಯಾಗಿದ್ದು ತುಂಬಾ ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ನಂದಿನಿ ಬ್ರ್ಯಾಂಡ್ಗೆ ಯಾವುದೇ ಸಂಭಾವನೆ ಪಡೆಯದ ವಿಚಾರವಾಗಿ ಮಾತನಾಡಿದ ಅವರು, ಇದು ನಮ್ಮ ಸರ್ಕಾರ ಹಾಗೂ ನಮ್ಮ ಪ್ರಾಡೆಕ್ಟ್ ಆಗಿದ್ದು, ನಮ್ಮ ರೈತರಿಗೋಸ್ಕರ ಯಾವಾಗ್ಲು ಜೊತೆಯಲ್ಲಿರುತ್ತೇನೆ ಎಂದು ತಿಳಿಸಿದ್ದಾರೆ.