ಉನ್ನತ ಸ್ಥಾನ, ಹುದ್ದೆಗಳಲ್ಲಿರುವವರು ಮಾತಾಡುವಾಗ ಭಾವೋದ್ರೇಕಕ್ಕೆ ಒಳಗಾದರೆ ಇಂಥ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇದು ಕೇವಲ ಸಿದ್ದರಾಮಯ್ಯ ಒಬ್ಬರ ಕತೆಯಲ್ಲ. ರಾಜಕಾರಣಿಗಳು, ನಮ್ಮನ್ನಾಳುವ ನಾಯಕರ ಸ್ವಭಾವವೇ ಹಾಗೆ. ವೀರಾವೇಶದಲ್ಲಿ ಏನೋ ಹೇಳಿ ಚಪ್ಪಾಳೆ ಗಿಟ್ಟಿಸುತ್ತಾರೆ ಆದರೆ ವಾಸ್ತವ ಎದುರುದಾಗ ಪೇಚಿಗೆ ಸಿಕ್ಕಿಕೊಳ್ಳುತ್ತಾರೆ. ಸಿದ್ದರಾಮಯ್ಯರಂಥ ಅನುಭವಿ ರಾಜಕಾರಣಿಗೆ ಇಂಥ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದ್ದು ವಿಷಾದಕರ.